ಈ ಸೇವೆಯು ಒಂದು ದಿನದಾಗಿರುತ್ತದೆ. ಪೂಜೆಗೆ ಒಂದು ದಿನ ಮುಂಚಿತವಾಗಿ ತಮ್ಮ ಹೆಸರು ನೋಂದಾಯಿಸಬೇಕು ಮತ್ತು ಆ ದಿನದ ಸೇವಾಕರು ಶುಚಿತರಾಗಿ ಬೆಳಗ್ಗೆ 7.30 ಗಂಟೆಗೆ ದೇವಾಲಯದ ಪ್ರಾಂಗಣದಲ್ಲಿ ಇರಬೇಕು. ನೈವೆದ್ಯಕ್ಕೆ ಸ್ವಾಮಿಯ ವಸ್ತ್ರವನ್ನು ನೀಡಲಾಗುತ್ತದೆ.
ಮಗು ಹುಟ್ಟಿದ ದಿನ, ವಿವಾಹ ದಿನ, ಸ್ಮರಣೆಯ ದಿನ ನಿಮ್ಮ ಕುಂಟುಬದಲ್ಲಿ ವಿಶೇಷವಾಗಿದ್ದಲ್ಲಿ ಈ ಸ್ವಾಮಿ ಸನ್ನಿಧಿಯಲ್ಲಿ ನೋಂದಾಯಿಸಿ ಭಾನುವಾರದಿಂದ ಶನಿವಾರದ ಒಳಗೆ ಶುಭ ಸ್ಮರಣೆ ಇದಲ್ಲಿ ಶನಿವಾರದಂದು ಶಾಶ್ವತವಾಗಿ ನಿಮ್ಮ ಹೆಸರಿನಲ್ಲಿ (ಒಂದು ದಿನ) ಅನ್ನದಾನ ಮಾಡಲಾಗುತ್ತದೆ.
ಶ್ರಾವಣ ಮಾಸದ ಪ್ರತಿ ಶನಿವಾರದಂದು ಶ್ರೀ ಆಂಜನೇಯ ಸ್ವಾಮಿಗೆ ವಿಶೇಷವಾಗಿ ಅಲಂಕಾರ ಇರುತ್ತದೆ. ಮೂರನೇ ಶನಿವಾರದಂದು ಶ್ರೀ ಸ್ವಾಮಿಗೆ ಬೆಳ್ಳಿಯ ವಜ್ರಾಂಗಿ ಅಲಂಕಾರ ಇರುತ್ತದೆ, ಭಕ್ತ ಮಹಾಶಯರು ಪಾಲ್ಗೋಳ್ಳಬಹುದು.
ಪ್ರತಿ ತಿಂಗಳ ಅಮಾವಾಸ್ಯೆಯೆಂದು ಶ್ರೀ ಸ್ವಾಮಿಗೆ ವಿಷೇಶವಾಗಿ ಪೂಜೆಗಳು ನಡೆಯುತ್ತವೆ. ಉತ್ಸವ ಅನ್ನದಾನ ಇರುತ್ತದೆ. ಸೇವೆ ನೇರವೇರಿಸಲು ಮುಂಚಿತವಾಗಿ ತಮ್ಮ ಹೆಸರನ್ನು ನೊಂದಾಯಿಸಿ ಸೇವೆಯಲ್ಲಿ ಪಾಲ್ಗೋಳ್ಳಬಹುದು.
ಶ್ರೀ ಸ್ವಾಮಿ ವಡಮಾಲ ಸೇವಾ ಮಾಡಿಸುವವರು ಮೊದಲು ಸ್ವಾಮಿಗೆ ನೈವೇದ್ಯ ಅರ್ಪಿಸಿ ನಂತರ ಪ್ರಸಾದವನ್ನು ವಿತರಿಸಲಾಗುವುದು, ಹೊರಗಡೆಯಿಂದ ತಂದ ಪ್ರಸಾದವನ್ನು ನೈವೇದ್ಯ ಮಾಡುವುದಿಲ್ಲ.
ಶ್ರೀ ಸ್ವಾಮಿಗೆ ಪ್ರತಿ ಶನಿವಾರದಂದು 48 ಶನಿವಾರದೊಳಗೆ ಹೆಸರು ಗೋತ್ರವನ್ನು ಹೇಳಿ ಅರ್ಚನೆ ಮಾಡುವುದು.
ಸ್ವಾಮಿಗೆ ವಿಶೇಷ ದಿನ ಮತ್ತು ಇಷ್ಠ ದಿನದಂದು ಭಕ್ತಾಧಿಗಳು ಸೀತಾರಾಮ ಪ್ರಕಾರ ಉತ್ಸವವನ್ನು ನೇರವೇರಿಸಹುದು.
ಶ್ರೀ ಸ್ವಾಮಿಗೆ 108 ಕಲಶಗಳಿಂದ ಅಭೀಷೇಕ
ಶ್ರೀ ಆಂಜನೇಯ ಸ್ವಾಮಿ ಸನ್ನಿದಾನದಲ್ಲಿ ರಾಮಕೋಟಿ ಪುಸ್ತಕವನ್ನು ಭಕ್ತರು ಮುದ್ರಿಸಿ ಅರ್ಪಿಸಬಹುದು ಮತ್ತು ಬರೆದು ಅರ್ಪಿಸಬಹುದು.
ಶ್ರೀ ಸ್ವಾಮಿಯ ಸನ್ನಿದಾನದಲ್ಲಿ ಕಾರ್ತಿಕ ಮಾಸದಂದು ಪ್ರತಿ ಸೋಮವಾರದಂದು ವಿಶೇಷ ಪೂಜಾ ನೇರವೇರಿಸಬಹುದು.
ಶ್ರೀ ಸ್ವಾಮಿಯ ಸನ್ನಿದಾನದಲ್ಲಿ ಲಕ್ಷ ಅರ್ಚನಾ ಸೇವೆ ಮಾಡಿಸಬಹುದು.