ಶ್ರೀ ವೀರಾಂಜನೇಯ ಸ್ವಾಮಿ ದೇವಾಲಯವು ಮುಜರಾಯಿ ಇಲಾಖೆಗೆ ಒಳಪಟ್ಟಿರುತ್ತದೆ .ಈ ದೇವಾಲಯವು ಬೆಂಗಳೂರು (ಉ) ಗ್ರಾಮಾಂತರ ದೇವನಹಳ್ಳಿ ತಾಲ್ಲೂಕು ಕುಂದಾಣ ಹೋಬಳಿ ,ಬನ್ನಿಮಂಗಲ ಗ್ರಾಮದಲ್ಲಿ ನೆಲೆಸಿರುವ ಸ್ವಾಮಿಯು ಸರಿ ಸುಮಾರು ಒಂದು ಎಕರೆ ವಿಸ್ತೀರ್ಣದಲ್ಲಿ ಕಲ್ಲಿನ ಕಟ್ಟಡ ಹಾಗೂ ರಾಜಗೋಪುರದಿಂದ ನಿರ್ಮಿಸಲಾಗಿದ್ದು,ಎಳ್ಳಿನ ಪಾವಿತ್ರತೆಯು ಹಾಗೂ ದೇವ ಸಾನಿದ್ಯವು ಅತಿ ಸರಳ ಸ್ಥಳಗಳಲ್ಲಿ ಕಾಣಬಹುದಾಗಿದೆ.
ಈ ದೇವಾಸ್ಥಾನವು ಪೂರ್ವಾಭಿಮುಖವಾಗಿ ಗ್ರಾಮದ ಮುಂಭಾಗದಲ್ಲಿದ್ದು,ದೇವಾಲಯದ ಹಿಂಭಾಗದಲ್ಲಿ ಬಹು ದೊಡ್ಡ ಕೆರೆ ಇದ್ದು ದೇವಾಲಯದ ದಕ್ಷಿಣ ದಿಕ್ಕಿನಲ್ಲಿ ಅರ್ಧ ಪರ್ಲಾಂಗ್ ನಡೆದರೆ ನೂರಾರು ಕಲಿನ್ನ ನಾಗದೇವತೆಗಳು ಮತ್ತು ಅರಳಿ ವೃಕ್ಷವನ್ನು ಕಾಣಬಹುದಾಗಿದೆ. ದೇವಸ್ಥಾನದ ಎಡಭಾಗದಲ್ಲಿ ವಾಸುಕಿ,ತಕ್ಷುಕಿ ,ನಾಗರಾಜ ಮತ್ತು ಅಶ್ವಥನಾರಾಯಣ ದೇವರುಗಳು ನೆಲಸಿದ್ದು, ದೇವಾಲಯದ ಮುಂಭಾಗದಲ್ಲಿ ಗ್ರಾಮದೇವತೆ ಚಕ್ರಮಾರಿಯಮ್ಮ ದರ್ಶನ ಮಾಡಬಹುದು. ಶ್ರೀ ವೀರಾಂಜನೇಯ ಸ್ವಾಮಿ ದೇವಾಲಯ ಮುಂಭಾಗ 50 ಅಡಿ ಎತ್ತರದ ರಾಜಗೋಪುರವು ವೀರಾಜಮಾನವಾಗಿ ಶಿಲ್ಪ ಕಲೆಗಳಿಂದ ಕೂಡಿದ್ದು ಅತಿ ಅದ್ಬುತವಾಗಿದ್ದು ನೋಡಲು ಮನೋಹರವಾಗಿದೆ.
ಗೋಪುರದ ಒಳ ಪ್ರವೇಶಿಸಿದರೆ ಗಣಪತಿ, ಆಂಜನೇಯ,ಶಂಕ,ಚಕ್ರ ಮತ್ತು ನಾಮ ಉಳ್ಳ 30 ಅಡಿ ಉದ್ದದ ಕಲ್ಲಿನ ದ್ವಜ ಸ್ತoಭ ಕಾಣಬಹುದು. ಈ ಪ್ರಕಾರದಲ್ಲಿ ಹೋದರೆ ಈಶಾನ್ಯ ದಿಕ್ಕಿನಲ್ಲಿ ಕಲ್ಲಿನ ಮಂಟಪದೊಂದಿಗೆ ನವಗ್ರಹಗಳನ್ನು ದರ್ಶನ ಮಾಡಬಹುದು, ಆಗ್ನೇಯ ದಿಕ್ಕಿನಲ್ಲಿ ಅನ್ನದಾಸೋಹಕ್ಕೆ ಪ್ರಾಂಗಣಗಳು ಇದ್ದು,ದಕ್ಷಿಣ ಭಾಗದಲ್ಲಿ ಶಮಿ ವೃಕ್ಷ ಮತ್ತು ಬಸವಣ್ಣ ಶಿಲೆ ಇರುವುದು ಕಾಣಬಹುದು,ದೇವಸ್ಥಾನದ ನೈರುತ್ಯ ಬಾಗದಲ್ಲಿ ಉತ್ತರ ಮೂಖವಾಗಿ ನೆಲಿಸೇರುವ ಗಣಪತಿಯನ್ನು ಕಾಣಬಹುದು, ಮುಂಭಾಗದಲ್ಲಿ ಸಭಾ ಪ್ರಾಗಂಣ ಇದ್ದು ಇದರಲ್ಲಿ ಮದುವೆ ಮತ್ತು ಇತರೆ ಸಮಾರಂಭಗಳನ್ನು ನಡೆಸಬಹುದಾಗಿದೆ. ನಂತರ ಮುಖ್ಯದ್ವಾರದಿಂದ ಒಳಗಡೆ ಪ್ರವೇಶಿಸಿದಾಗ ಶ್ರೀ ವೀರಾಂಜನೇಯ ಸ್ವಾಮಿ ದರ್ಶನ ಪಡೆದು ಧನ್ಯರಾಗಬಹುದು ಮತ್ತು ಸ್ವಾಮಿಯ ಎಡ ಮತ್ತು ಬಲ ಭಾಗಗಳಲ್ಲಿ ಎರಡು ದ್ವಾರವು ಹಾಗೂ ಸ್ವಾಮಿಯ ಉತ್ತರ ದಿಕ್ಕಿನಲ್ಲಿ ವೈಕುಂಠ ದ್ವಾರವನ್ನು ಕಾಣಬಹುದು. ಈ ಸ್ವಾಮಿಯ ದಯೆಯಿಂದ ಒಳಿತನ್ನು ಕಂಡು ಸಹಸ್ರಾರು ಮಂದಿ ಭಕ್ತಾದಿಗಳು ತಮ್ಮ ಇಷ್ಟಾರ್ಥಗಳನ್ನು ನೆರೆವೇರಿಸಿಕೊಳ್ಳುತ್ತಿದ್ದಾರೆ.
ಶ್ರೀ ರಾಮ ಎನ್ನುವ ಎರಡಕ್ಷರವನ್ನು ಹನುಮನು ರಾಮಾವತಾರದಲ್ಲಿ ರಾಮ ಜಪವನ್ನು ಜಪಿಸುತ್ತಾ ಧ್ಯಾನದಲ್ಲಿ ಮುಳಿಗಿದ ಹನುಮಂತನು ರಾಮಾಯಣದ ಅಂತ್ಯದಲ್ಲಿ ರಾಮನು ಹನುಮಂತನನ್ನು ವೈಕುಂಠಕ್ಕೆ ಕರೆದೋಯುವೆ ಎಂದು ಕೇಳಿದಾಗ ಸ್ವಾಮಿ ವೈಕುಂಠದಲ್ಲೂ ರಾಮ ನಾಮ ಜಪ ಇರುತ್ತದೆಯೇ ಎಂದು ಕೇಳಿದಾಗ, ಶ್ರೀ ರಾಮನು ಅಲ್ಲಿ ಯಾವ ಜಪವು ಇರುವುದಿಲ್ಲ ಎಂದು ಹೇಳಿದಾಗ,ಹನುಮಂತನು ಸ್ವಾಮಿ ರಾಮ ನಾಮ ಜಪ ಎಲ್ಲಿ ಇರುತ್ತದೆಯೇ ಅಲ್ಲಿ ನಾನು ಇರುತ್ತೇನೆ ಎಂದು ಹೇಳಿದನು. ನೀನು ಮುಂದೆ ಬರುವ ಕಲಿಯುಗದಲ್ಲಿ ಬ್ರಹ್ಮನಾಗಿ ಪ್ರತಿ ಗ್ರಾಮದಲ್ಲಿ ನಿನ್ನ ವಿಗ್ರಹ ನೆಲೆಸಿರುತ್ತದೆ.
ಅಲ್ಲಿ ಸದಾ ರಾಮ ನಾಮ ಜಪ ಇರುತ್ತದೆ ಎಂದು ಹೇಳಿ ಶ್ರೀ ರಾಮನು ಅತಃದನನಾದನು. ಈ ಪ್ರಕಾರವಾಗಿ ಬನ್ನಿಮಂಗಲ ಗ್ರಾಮದಲ್ಲಿ ಸುಮಾರು 600 ವರ್ಷಗಳ ಹಿಂದೆಯೇ ದೇವಾಲಯವು ಮಣ್ಣಿನಲ್ಲಿ ನಿರ್ಮಾಣವಾಗಿತ್ತು . ತದ ನಂತರ ನೂರಾರು ಜನಗಳ ಸಹಾಯದ ಕಲ್ಲಿನ ದೇವಾಲಯವು ಮತ್ತು ಅದರರೊಂದಿಗೆ ದಾಸೋಹ ಮಂಟಪವು ನಿರ್ಮಾಣಗೊಂಡಿತ್ತು .ಗ್ರಾಮಸ್ಥರು ಮತ್ತು ಭಕ್ತಾದಿಗಳು ಸೇರಿ ಪುನರ್ ಶಂಕು ಸ್ಥಾಪನೆ ಮಾಡಿದರು. ನಂತರ ಭಕ್ತರು ಮತ್ತು ಗ್ರಾಮಸ್ಥರು ವಿಗ್ರವನ್ನು ಸ್ಥಳಾಂತರಿಸುವ ಯೋಜನೆಯಲ್ಲಿದ್ದರು, ಒಂದು ದಿನ ನಿಗದಿಯಾಯಿತು ಆ ದಿನದ ರಾತ್ರಿ ವಿಗ್ರಹದ ಸುತ್ತು ಮಣ್ಣನ್ನು ತೆರವುಗೊಳಿಸವ ಕಾರ್ಯ ರಭಸದಿಂದ ಸಾಗಿತ್ತಾದರೂ ಆ ಸಮಯದಲ್ಲಿ ವಿಗ್ರದ ಪಕ್ಕದಿಂದ ಒಂದು ಸರ್ಪ ರಭಸದಿಂದ ಹೊರಬಂದಿತು. ಸರ್ಪವನ್ನು ಕಂಡು ಜನರು ಭಯಭೀತರಾದರು, ಅಷ್ಟರಲ್ಲಿ ದೇವಸ್ಥಾನದ ಮುಂಭಾಗದಲ್ಲಿ ದೊಡ್ಡದಾದ ಗಲಾಟೆ ಶುರುವಾಯಿತು,ಜಗಳದಲ್ಲಿ ಒಬ್ಬ ಭಕ್ತನಿಗೆ ದೊಣ್ಣೆಯಿಂದ ಏಟುಬಿದ್ದು ನೆಲಕ್ಕೆ ಊರುಳಿದನು. ಅಲ್ಲಿಗೆ ವಿಗ್ರಹವನ್ನು ಸ್ಥಳಾಂತರಿಸುವ ವಿಷಯವನ್ನು ಕೈ ಬಿಟ್ಟರು, ಮೂಲ ವಿಗ್ರಹ ಇರುವ ಸ್ಥಳದಿಂದಲೇ ದೇವಸ್ಥಾನದ ನಿರ್ಮಾಣ ಕಾರ್ಯಕ್ಕಿಗೊಂಡಿತ್ತು. ಹಲವು ವರ್ಷಗಳ ನಂತರ ಪುನಾರ್ ಜೀರ್ಣೋದ್ದಾರವಾಗಿ ಭಕ್ತರ ಇಷ್ಟಾರ್ಥಗಳನ್ನು ನೆರೆವೇರಿಸಿಕೊಂಡು ಬಂದಿದ್ದಾರೆ.