ಶ್ರೀ ಕ್ಷೇತ್ರ ಬನ್ನಿಮಂಗಲ ಆಂಜನೇಯ ಸ್ವಾಮಿ ದೇವಸ್ಧಾನ ತೆರೆಯುವ ಮುಚ್ಚುವ ಸಮಯ
ಪ್ರತಿ ದಿನ ಬೆಳಗ್ಗೆ 8.00 ರಿಂದ ಪ್ರಾರಂಭವಾಗಿ ಸಂಜೆಯವರೆಗೂ ಕಾಯಂಆಗಿ ತೆರೆದಿರುತ್ತದೆ.
ಶನಿವಾರ ಅಮಾವಾಸ್ಯೆಯಂದು ವಿಶೇಷ ದಿನಗಳಲ್ಲಿ ಬೆಳಗ್ಗೆ 11.00 ರಿಂದ 3.00 ವರೆಗೆ ಅನ್ನ ಸಂತರ್ಪಣೆ ಇರುತ್ತದೆ.
ಭಕ್ತಾಧಿಗಳು ಪಾಲಿಸಬೇಕಾದ ನಿಯಮಗಳು
ಸ್ನಾನ ಮಾಡದೆ ದೇವಾಲಯವನ್ನು ಪ್ರವೇಶಿಸಬಾರದು.
ಚರ್ಮದಿಂದ ತಯಾರಾದ ವಸ್ತ್ರಗಳನ್ನು ದೇವಾಲಯಕ್ಕೆ ತರಕೂಡದು.
ತಂಬಾಕು ಹಾಗೂ ಮಧ್ಯಪಾನ ಇತ್ಯಾದಿ.. ಅಮಲು ಪದಾರ್ಥಗಳನ್ನು ಸೇವಿಸಿದವರು ದೇವಾಲಯಕ್ಕೆ ಪ್ರವೇಶಿಸಬಾರದು.
ಪಾದರಕ್ಷೆಯನ್ನು ದೇವಾಲಯದ ಪ್ರಾಗಂಣಕ್ಕೆ ತರಕೂಡದು.
ದೇವಾಲಯದ ಒಳಾಂಗಣದಲ್ಲಿ ಮೊಬೈಲ್ ಫೋನ್ಗಳನ್ನು ಖಡ್ಡಾಯವಾಗಿ ನೀಷೇದಿಸಿದೆ.
ಹೆಂಗಸರು ತಮ್ಮ ರಜಸ್ವಾಲೆ ದಿನಗಳಲ್ಲಿ ದೇವಾಲಯವನ್ನು ಪ್ರವೇಶಿಸಬಾರದು.
ಗರ್ಬಿಣಿ ಸ್ತೀಯರು ದೇವಾಲಯದ ಪ್ರಾಗಂಣಕ್ಕೆ ಬರಕೂಡದು.
ಭಕ್ತಾದಿಗಳು ದೇವಾಲಯದ ಶ್ಮಚಿತ್ವ ಹಾಗೂ ಪ್ರಾವಿತ್ಯತೆಯನ್ನು ಕಾಪಾಡತಕ್ಕದು.
ದೂಮಪಾನ ಸೇವನೆ, ಉಗುಳುವುದು ಇತ್ಯಾದಿ ಅಸಭ್ಯವರ್ತನೆಗಳನ್ನು ದೇವಾಲಯದ ಪ್ರಾಕಾರದಲ್ಲಿ ನೀಷೇದಿಸಿದೆ.
ಭಕ್ತಾದಿಗಳು ದೇವಾಲಯದ ಆವರಣದಲ್ಲಿ ಶಾಂತತೆಯಿಂದ ಮತ್ತು ಸೌಜನ್ಯದಿಂದ ವರ್ತಿಸತಕ್ಕದ್ದು.
ಯಾವುದೇ ಹೆಚ್ಚಿನ ಮಾಹಿತಿಗಳ ಬಗ್ಗೆ ಭಕ್ತಾದಿಗಳು ದೇವಾಲಯ ಕಛೇರಿಯನ್ನು ಸಂಪರ್ಕಿಸಿ ಮಾಹಿತಿಗಳನ್ನು ಪಡೆಯತಕ್ಕದ್ದು.
ಅಲಂಕಾರಗಳು
ಬೆಣ್ಣೆ ಅಲಂಕಾರ, ಅರಿಶಿನ ಅಲಂಕಾರ, ಗಂಧಾಲಂಕಾರ, ವಿಳೆದೆಲೆ ಅಲಂಕಾರ, ಕೊಬ್ಬರಿ
ಅಲಂಕಾರ, ಚಂದನ ಅಲಂಕಾರ, ಹೂವಿನ ಅಂಲಂಕಾರ, ತರಕಾರಿ ಅಲಂಕಾರ ಮತ್ತು ಇನ್ನೂ
ಮುಂತಾದ ಅಲಂಕಾರಗಳನ್ನು ಮಾಡಿಸಬಹುದು.